ಬಗೆಯುತ್ತಿದ್ದಾರೆ ಭೂತಾಯಿ ಒಡಲ ಚಿನ್ನಕ್ಕಾಗಿ
ತಲೆಕೆಟ್ಟ ಸಾಧುಗಳ ಕನಸ ಕೇಳಿ...
ಉಡಾಯಿಸುತ್ತಲೇ ಇದ್ದಾರೆ ಸ್ಯಾಟಲೈಟ್, ರಾಕೇಟುಗಳ
ತಿರುಪತಿ ತಿಮ್ಮಪ್ಪನೆಂಬ ಕಲ್ಲಿನ ಮೊರೆ ಹೋಗಿ
ಎಲ್ಲಿದೆ ತರ್ಕ, ಇನ್ನೆಲ್ಲಿ ಉಳಿದಿದೆ ವಿಜ್ಞಾನ
ತುಂಬಿ ತುಳುಕುತ್ತಿದೆ ಅಜ್ಞಾನ
ಎಡೆಯೆತ್ತಿದೆ ಮೌಢ್ಯ ಅಂಧಾಭಿಮಾನ
ತಿರುಪತಿ ತಿಮ್ಮಪ್ಪನೆಂಬ ಕಲ್ಲಿನ ಮೊರೆ ಹೋಗಿ
ಎಲ್ಲಿದೆ ತರ್ಕ, ಇನ್ನೆಲ್ಲಿ ಉಳಿದಿದೆ ವಿಜ್ಞಾನ
ತುಂಬಿ ತುಳುಕುತ್ತಿದೆ ಅಜ್ಞಾನ
ಎಡೆಯೆತ್ತಿದೆ ಮೌಢ್ಯ ಅಂಧಾಭಿಮಾನ

ಜಗತ್ತಿಗೆ ಮೌಢ್ಯನಿಬೀಡ ಶಾಂತಿ ಸಾರಿದ
ಬುದ್ದ, ಬಸವರಿಗೂ ಬಾಂಬುಗಳನ್ನಿಟ್ಟು
ಹೋಮ ಮಾಡಿವೆ ಸಂಘಪರಿವಾರಗಳು
ಮನೆ, ಮಠ, ಕಚೇರಿ ಪ್ರವೇಶಕ್ಕೂ
ಹೋಮ ಹವನ ನಡೆಸಿವೆ ಅಂಧ ಆಡಳಿತ ವರ್ಗ
ಬುದ್ದ ಬಸವಾದಿ ಶರಣರ ತತ್ವಗಳನ್ನೇ
ಬುಡಮೇಲು ಮಾಡಿರುವ ಇಂತಹ ಅನಾಗರಿಕ
ಮನುವಾದಿಗಳ ಮುಂದೆ ನಿಲ್ಲುವುದೇ
ನಿಮ್ಮ ಮೌಢ್ಯ ನಿಷೇಧ ಕಾಯ್ದೆ ಸಿದ್ದರಾಮ.
ಪ್ರಕಾಶ್..

